‘ಸಮೃದ್ಧ ಬೈಂದೂರು’: ಶಾಸಕ ಗುರುರಾಜ್ ಗಂಟಿಹೊಳೆ ಪರಿಕಲ್ಪನೆ.. ಹಳ್ಳಿ-ಹಳ್ಳಿಗಳಲ್ಲಿ ವೈದ್ಯಕೀಯ ಶಿಬಿರ

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ಳಿ ಪ್ರದೇಶವಾದ ಗಂಗಾನಾಡು, ಕ್ಯಾರ್ತುರು ಭಾಗದಲ್ಲಿ ವೈದ್ಯಕೀಯ ಶಿಬಿರ ನೆಡೆಸಿ ಫಲಾನುಭವಿಗಳಿಗೆ ಉಚಿತ ತಪಾಸಣೆ, ಚಿಕಿತ್ಸೆಯ ಜತೆಗೆ ಔಷಧ ವಿತರಿಸಲಾಯಿತು.

ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಜತೆಗೆ ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಇಂತಹ ಶಿಬಿರಗಳ ಪೂರ್ಣ ಉಪಯೋಗ ಪಡೆಯಬೇಕು. ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಹಲವು ಕಾಯಕ್ರಮ ನಡೆಸುತ್ತಿದ್ದೇವೆ ಎಂದರು.

ಮುಂದೆಯೂ ಸತತವಾಗಿ ಪ್ರತೀ ತಿಂಗಳು ಸಮೃದ್ಧ ಬೈಂದೂರು ಹಳ್ಳಿ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಭಿರ ನೆಡೆಸಾಲಿದೆ ಹಳ್ಳಿಪ್ರದೇಶದ ಪ್ರತೀ ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ವೈದ್ಯಧಿಕಾರಿಗಳು ಮತ್ತು ಶಾಸಕರು ಸಾರ್ವಜನಿಕರೆ ಕರೆ ನೀಡಿದರು.

ಸಮೃದ್ಧ ಬೈಂದೂರು ಟ್ರಸ್ಟ್‌ ಅಧ್ಯಕ್ಷರಾದ ಎಸ್.ಸುರೇಶ್ ಶೆಟ್ಟಿ, ಗಂಗನಾಡು ಶಾಲಾ ಮುಖ್ಯಶಿಕ್ಷಕರಾದ ಪ್ರಭಾಕರ್ ಬಿಲ್ಲವ, SDMC ಅಧ್ಯಕ್ಷರಾದ ರಾಜು ಮರಾಠಿ ಹಾಗೂ ತಾಲೂಕಿನ ಹಲವು ವೈದ್ಯರ ತಂಡ ಶಿಬಿರದಲ್ಲಿ ವೈದ್ಯಕೀಯ ಸಲಹೆ, ಚಿಕಿತ್ಸೆ ನೀಡಿದರು.

You may have missed