ಜಾತಿ ಆಧಾರಿತ ತಾರತಮ್ಯ ಹಿಂದೂ ಸಂಸ್ಕೃತಿಯ ಭಾಗವಲ್ಲ: ದತ್ತಾತ್ರೇಯ ಹೊಸಬಾಳೆ

0
Dattatreya-Hosabale-RSS

ಭೋಪಾಲ್: ಜಾತಿ ಹಾಗೂ ಹುಟ್ಟಿನ ಆಧಾರದ ಮೇಲೆ ಮನುಷ್ಯರ ನಡುವೆ ತಾರತಮ್ಯ ಮಾಡುವುದು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಭೋಪಾಲ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ನಾವೆಲ್ಲರೂ ದೇವರ ಮಕ್ಕಳು. ಹೀಗಾಗಿ ಮನುಷ್ಯರ ನಡುವೆ ಯಾವುದೇ ರೀತಿಯ ತಾರತಮ್ಯ ಇರಬಾರದು” ಎಂದು ಹೇಳಿದರು.

#WATCH | Bhopal, Madhya Pradesh: RSS General Secretary Dattatreya Hosabale says, “… We are all children of Mother India. We are all children of God. Therefore, there should be no discrimination of any kind among humans. Discrimination based on birth is not part of Hindu… pic.twitter.com/KBAQbJktwO

— ANI (@ANI) September 20, 2026

ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ಕಂಡುಬರುವ ವಿವಿಧ ರೀತಿಯ ದುಷ್ಟ ಆಚರಣೆಗಳು ಸಮಾಜವನ್ನು ದುರ್ಬಲಗೊಳಿಸಿ, ಆಂತರಿಕವಾಗಿ ಪೊಳ್ಳಾಗಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಂತ ನಡವಳಿಕೆಯಿಂದ ಬದಲಾವಣೆ ಅಗತ್ಯ

ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕುವ ಬದಲಾವಣೆ ಪ್ರತಿಯೊಬ್ಬರ ಸ್ವಂತ ನಡವಳಿಕೆಯಿಂದ ಆರಂಭವಾಗಬೇಕು ಎಂದು ಹೊಸಬಾಳೆ ಹೇಳಿದರು.

“ನಾವು ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂಬ ಸಂಕಲ್ಪವನ್ನು ನಮ್ಮ ಜೀವನ, ಮನೆ ಮತ್ತು ದೈನಂದಿನ ನಡವಳಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ಆಧಾರಿತ ತಾರತಮ್ಯ ಹಿಂದೂ ಸಮಾಜಕ್ಕೆ ಕಳಂಕವಾಗಿದ್ದು, ಅದರಿಂದ ಮುಕ್ತರಾಗಬೇಕಿದೆ” ಎಂದರು.

ಈ ಬದಲಾವಣೆ ಕೇವಲ ಕಾನೂನು, ಧಾರ್ಮಿಕ ಉಪದೇಶ ಅಥವಾ ಯಾರಾದರೂ ನೀಡುವ ಬೋಧನೆಯಿಂದ ಮಾತ್ರ ಸಾಧ್ಯವಲ್ಲ. ಪ್ರತಿಯೊಬ್ಬರೂ ತಮ್ಮ ನಡೆ-ನುಡಿಯಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದರು.

“ನಾವೆಲ್ಲರೂ ಈ ಬದಲಾವಣೆಗೆ ಸಂಕಲ್ಪ ಮಾಡಿ ಮುನ್ನಡೆಯೋಣ” ಎಂದು ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.

Leave a Reply

Your email address will not be published. Required fields are marked *