ಕೂದಲು ಉದುರುತ್ತಿದೆಯೇ..ಅಡುಗೆ ಮನೆಯಲ್ಲಿದೆ ನಿಮ್ಮ ಸಮಸ್ಯೆಗೆ ಪರಿಹಾರ

ತಲೆಕೂದಲು ಸೌಂದರ್ಯಕ್ಕೆ ಮುಕುಟವಿಟ್ಟಂತೆ. ಈ ಸೌಂದರ್ಯ ಕಾಪಾಡಲು ಎಷ್ಟೇ ಹರಸಾಹಸ ಪಟ್ಟರೂ ಕೆಲವೊಮ್ಮೆ ಇವು ನಮ್ಮಕೈಯಿಂದ ಅಸಾಧ್ಯ ಅನಿಸಿಬಿಡುವುದುಂಟು. ಕೂದಲು ಬೆಳ್ಳಗಾಗುವುದು ಹಾಗೂ ಉದುರುವುದು ಇತ್ತೀಚಿಗೆ ಕಂಡುಬರುತ್ತಿರುವ ಸಮಸ್ಯೆ.
ಆದರೆ ನೈಸರ್ಗಿಕ ವಸ್ತುಗಳ ಬಳಕೆಯಿಂದ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಈ ಪೈಕಿ ಕೂದಲ ಆರೈಕೆಯಲ್ಲಿ ಪ್ರಮುಖಪಾತ್ರವಹಿಸುವುದು ಕರಿಬೇವು. ಕರಿಬೇವಿನಲ್ಲಿರುವ ಪೋಷಕಾಂಶಗಳು ನಿಮ್ಮ ಕೂದಲನ್ನು ಹೆಚ್ಚು ಶಕ್ತಿಶಾಲಿಯನ್ನಾಗಿಸುತ್ತದೆ.
ಅದರ ಸೇವನೆ ಅಥವ ಅದನ್ನು ನೆತ್ತಿಗೆ ಹಚ್ಚುವುದರಿಂದ ಕೂದಲಿಗೆ ಪುನರ್ ಚೇತನ್ ಸಿಗುತ್ತದೆ. ಇನ್ನೂ ಚಿಕ್ಕ ಮಕ್ಕಳಲ್ಲಿ ಹದಿಹರೆಯದವರಲ್ಲಿ ಕಾಣಿಸುವ ನೆರೆ ಕೂದಲ ಸಮಸ್ಯೆ ನಿವಾರಣೆ ಮಾಡುವಲ್ಲಿ ಕರಿಬೇವಿನ ಪಾತ್ರ ಮಹತ್ವದ್ದು.
ಕರಿಬೇವಿನಲ್ಲಿ ಆಂಟಿ ಅಕ್ಸಿಡೆಂಟ್ ಹಾಗೂ ಅಮಿನೋ ಆಮ್ಲ ಹೆಚ್ಚಾಗಿರುವುದರಿಂದ ಕೂದಲು ಉದುರುವಿಕೆಯನ್ನು ಇದು ತಡೆಯುತ್ತದೆ.
ಕರಿಬೇವಿನ ಪೇಸ್ಟನ್ನು ಮೊಸರಿನೊಂದಿಗೆ ಕಲಸಿ ಕೂದಲಿಗೆ ಹಚ್ಚಿ 20 ನಿಮಿಷದ ಬಳಿಕ ಕೂದಲನ್ನು ತೊಳೆಯುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಕೊಬ್ಬರಿ ಎಣ್ಣೆಗೆ ಕರಿಬೇವು ಹಾಕಿ ಕುದಿಸಿ ಈ ಎಣ್ಣಯನ್ನು ಪ್ರತಿದಿನ ರಾತ್ರಿ ಮಲಗುವಾಗ ಹಚ್ಚಿ ಮರುದಿನ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು..