ಎಂಎಸ್‌ಪಿ ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ : ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ

Kuruburu Shanthakumar Farmer

ಹರಿಯಾಣ: ಹರಿಯಾಣ ಚುನಾವಣಾ ಹಿನ್ನಲೆಯಲ್ಲಿ. ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸರು ರೈತರಿಗೆ ತಿಳಿಸಿದ್ದಾರೆ.. ಹಾಗೂ ಸಮಾವೇಶದ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನ ಮೈಕಳನ್ನ ಕಿತ್ತುಹೊಯ್ದಿದ್ದಾರೆ. ಇದನ್ನು ರೈತ ಮುಖಂಡರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದ್ದಾರೆ..

ಸಮಾವೇಶ ನಡೆಸಲು ಹಾಕಿದ್ದ ಟೆಂಟುಗಳನ್ನ ಕಿತ್ತಾಕಿ ಮೈಕಳನ್ನ ಕಿತ್ತೆಸೆದ ಪೊಲೀಸರು ಬೆಳಿಗ್ಗೆ 9:00 ಒಳಗೆ ಸಮಾವೇಶ ನಡೆಸಲು ಆಸ್ಪದ ನೀಡದಿದ್ದರೆ. ರೈತರು ರಾಜ್ಯದ್ಯಂತ ಎಲ್ಲ ರಸ್ತೆಗಳನ್ನ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸಮಾವೇಶ ನಡೆಸಲು ಅವಕಾಶ ಕಲ್ಪಿಸಿತು ಆದರೆ ಪಕ್ಕದ ರಾಜ್ಯದ ಪಂಜಾಬ್ ರೈತರಿಗೆ ಸಮಾವೇಶಕ್ಕೆ ಬರಲು ಅವಕಾಶ ನೀಡಲಿಲ್ಲ. ಆಗ ಮತ್ತಷ್ಟು ಸಂಖ್ಯೆಯ ರೈತರು ತಂಡೋಪ ತಂಡವಾಗಿ ಸಮಾವೇಶ ಸ್ಥಳಕ್ಕೆ ಬಂದರು. ಇದರಿಂದ ರೈತಶಕ್ತಿ ಇಮ್ಮಡಿ ಗೊಳಿಸಿತು.

ಇದೇ ಸಮಾವೇಶದಲ್ಲಿ ಮಾತನಾಡಿದ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಕೇಂದ್ರ ಸರ್ಕಾರಕ್ಕೆ ರೈತರ ಕೂಗು ಕೇಳುತ್ತಿಲ್ಲ.ಅದರೆ ಶ್ರೀಮಂತರು ಬಂಡವಾಳ ಶಾಹಿಗಳು ಕಣ್ಣು ಸನ್ನೆಯಲ್ಲಿ ಸೂಚನೆ ನೀಡಿದರೆ ಸಾಕು ಕಾನೂನುಗಳು ಜಾರಿಯಾಗುತ್ತವೆ. ಸಾಲ ಮನ್ನಾ ವಾಗುತ್ತದೆ. ಇದು ಪ್ರಜಾ ಪ್ರಭುತ್ವ ಸರ್ಕಾರ ಎನ್ನುವುದು ನಾಚಿಕೆ ತರುವಂತ ವಿಚಾರ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ರೈತರು ಸ್ವಲ್ಪ ಬಿಸಿ ಮುಟ್ಟಿಸಿದರೂ ಎಚ್ಚೆತ್ತಿಲ್ಲ. ಈಗ ಹರಿಯಾಣ ಚುನಾವಣೆಯಲ್ಲಿ ಸರಿಯಾದ ಪಾಠವನ್ನೆ ಕಲಿಸಬೇಕಾಗಿದೆ ಎಂದ ಅವರು, ಪಂಜಾಬ್ ಹರಿಯಾಣ ರೈತರ ರೀತಿಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಹೋರಾಟ ನಡೆದರೆ
ರೈತ ದ್ರೋಹಿ ನೀತಿಗಳನ್ನು ಬದಲಾಯಿಸಬಹುದು. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ ಎಂದು  ತಿಳಿಸಿದರು

ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ಮುಖ್ಯಸ್ಥ ಜಗಜಿತ್ ಸಿಂಗ್ ದಲೆವಾಲ ಮಾತನಾಡಿ ಇಂದಿನ ಸಮಾವೇಶವನ್ನು ತಪ್ಪಿಸಲು ಚುನಾವಣಾ ನೆಪದಲ್ಲಿ ಪೊಲೀಸರ ಬಲ ಪ್ರಯೋಗ ನಡೆಯಿತು. ರೈತಶಕ್ತಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಿ ಸಮಾವೇಶ ನಡೆಸುತ್ತಿದ್ದೇವೆ ಇಡೀ ದೇಶದ ರೈತರು ನಮ್ಮ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಹರಿಯಾಣದ ಉಚ್ಚಾನದಲ್ಲಿ ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಲಕ್ಷಾಂತರ ರೈತರು ಭಾಗವಹಿಸಿದ್ದರು

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇತ್ಯಾದಿ ಒತ್ತಾಯಗಳ ಬಗ್ಗೆ ಹೋರಾಟ ಪ್ರಬಲಗೊಳಿಸಲು ಎಲ್ಲಾ ರಾಜ್ಯಗಳ ರೈತ ಮುಖಂಡರು ತೀರ್ಮಾನಿಸಿದರು

ಹರಿಯಾಣ ರೈತ ಮುಖಂಡ ಅಭಿಮನ್ಯುಕೊಹಾರ್. ಲಕ್ವೀನ್ದರ್ ರ್ಸಿಂಗ್. ಮಾತನಾಡಿ ಚಳುವಳಿಯನ್ನ ಹತ್ತಿಕುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದ್ದೆ. ಈ ರೈತ ಸಮಾವೇಶಕ್ಕೆ ಬರಲು ಪಂಜಾಬ್ ರೈತರನ್ನು ತಡೆ ಒಡ್ಡಿದ ಹರಿಯಾಣ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ರೈತರು ಬುದ್ದಿ ಕಲಿಸಬೇಕು ಎಂದು ರೈತರಿಗೆ ಕರೆ ನೀಡಲಾಯಿತು ಎಂದರು.

You may have missed