ಆಡಿಯೋ ಬಾಂಬ್: ನೀವೇ ರಾಜೀನಾಮೆ ಕೊಡ್ತೀರಾ? ಜಮೀರ್ ಅವರ ರಾಜೀನಾಮೆ ಪಡೀತೀರಾ? ಬಿಜೆಪಿ ಪ್ರಶ್ನೆ

ಬೆಂಗಳೂರು: ಆರ್ಥಿಕವಾಗಿ ದಿವಾಳಿ ಆಗಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ವಸತಿ ನಿಗಮದ ಮನೆಗಳನ್ನು ಹಣ ಕೊಟ್ಟವರಿಗೆ ಮಾತ್ರ ನೀಡಿ ಹಗಲು ದರೋಡೆ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
<blockquote class=”twitter-tweet” data-media-max-width=”560″><p lang=”kn” dir=”ltr”>ಆರ್ಥಿಕವಾಗಿ ದಿವಾಳಿ ಆಗಿರುವ ಭ್ರಷ್ಟ <a href=”https://twitter.com/siddaramaiah?ref_src=twsrc%5Etfw”>@siddaramaiah</a> ಸರ್ಕಾರ ವಸತಿ ನಿಗಮದ ಮನೆಗಳನ್ನು ಹಣ ಕೊಟ್ಟವರಿಗೆ ಮಾತ್ರ ನೀಡಿ ಹಗಲು ದರೋಡೆ ಮಾಡುತ್ತಿದೆ.<br><br>ಆಳಂದ ಶಾಸಕ <a href=”https://twitter.com/brpatilmla?ref_src=twsrc%5Etfw”>@brpatilmla</a> ಹಾಗೂ ಸಚಿವ <a href=”https://twitter.com/BZZameerAhmedK?ref_src=twsrc%5Etfw”>@BZZameerAhmedK</a> ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಮನೆಗಳನ್ನು ಹಣ ಪಡೆದು ಹಂಚಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ.… <a href=”https://t.co/ykPrqXGQ5I”>pic.twitter.com/ykPrqXGQ5I</a></p>— BJP Karnataka (@BJP4Karnataka) <a href=”https://twitter.com/BJP4Karnataka/status/1936008554869408089?ref_src=twsrc%5Etfw”>June 20, 2025</a></blockquote> <script async src=”https://platform.twitter.com/widgets.js” charset=”utf-8″></script>
ಆಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಸಚಿವ ಸಚಿವ ಜಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಮನೆಗಳನ್ನು ಹಣ ಪಡೆದು ಹಂಚಿರುವ ಬಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡಿಕೊಂಡಿದ್ದಾರೆ ಎನ್ನಲಾದ ಆಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡುತ್ತಿರೋ ಅಥವಾ ನಿಮ್ಮ ಆಪ್ತ ಜಮೀರ್ ಅವರಿಂದ ರಾಜೀನಾಮೆ ಕೊಡಿಸುತ್ತಿರೋ? ಎಂದು ಪ್ರಶ್ನಿಸಿದೆ.
