ನಿರುದ್ಯೋಗಿಗಳು ಉದ್ಯಮಿಗಳಾದ ಯಶೋಗಾಥೆ; ಯೋಗಿ ಸಾರಥ್ಯದ ‘ಯುವ ಉದ್ಯಮಿ ವಿಕಾಸ ಅಭಿಯಾನ’ ಫಲಪ್ರದ

0
yogi adityanath

ಲಖನೌ: ಉತ್ತರ ಪ್ರದೇಶದಲ್ಲಿ ನಿರುದ್ಯೋಗಿ ಯುವಕರನ್ನು ಸ್ವಾವಲಂಬಿ ಉದ್ಯಮಿಗಳಾಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರಂಭಿಸಿರುವ ‘ಮುಖ್ಯಮಂತ್ರಿಗಳ ಯುವ ಉದ್ಯಮಿ ವಿಕಾಸ ಅಭಿಯಾನ’ ಫಲ ನೀಡುತ್ತಿದೆ. ಪ್ರತಿವರ್ಷ ಕನಿಷ್ಠ ಒಂದು ಲಕ್ಷ ಯುವಕರಿಗೆ ಸ್ವ ಉದ್ಯೋಗ ಅವಕಾಶ ಕಲ್ಪಿಸುವ ಗುರಿಯೊಂದಿಗೆ ಜಾರಿಯಲ್ಲಿರುವ ಈ ಯೋಜನೆ, ಅನೇಕ ಯುವಕರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿದೆ.

ಈ ಯೋಜನೆಯ ಲಾಭ ಪಡೆದವರಲ್ಲಿ ಲಖಿಂಪುರ ಖೇರಿ ಜಿಲ್ಲೆಯ ಮುಜಾಹಿದ್ ಶೇಖ್ ಅವರ ಕಥೆ ವಿಶೇಷ ಗಮನ ಸೆಳೆಯುತ್ತದೆ. ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದ ಮುಜಾಹಿದ್, ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟ, ನಿರುದ್ಯೋಗ ಮತ್ತು ಸಾಮಾಜಿಕ ನಿರ್ಲಕ್ಷ್ಯದಿಂದ ಖಿನ್ನತೆಗೆ ಒಳಗಾಗಿದ್ದರು. ಆದರೆ ಸರ್ಕಾರದ ಸಮಯೋಚಿತ ನೆರವು ಮತ್ತು ಮಾರ್ಗದರ್ಶನದಿಂದ ಅವರು ಆ ಸಂಕಷ್ಟಗಳನ್ನು ಮೀರಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

‘ಮುಖ್ಯಮಂತ್ರಿಗಳ ಯುವ ಉದ್ಯಮಿ ವಿಕಾಸ ಅಭಿಯಾನ’ ಅವರ ಬದುಕಿನಲ್ಲಿ ತಿರುವು ತಂದಿತು. ಮೇಲಾಧಾರ ರಹಿತ ಹಾಗೂ ಬಡ್ಡಿ ರಹಿತ ಸಾಲದ ಸಹಾಯದಿಂದ ಅವರು ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯನ್ನು ಆರಂಭಿಸಿದರು. ಆನ್‌ಲೈನ್ ಜಗತ್ತಿಗೆ ಕಾಲಿಡಲು ಹಿಂಜರಿಯುತ್ತಿದ್ದ ಗ್ರಾಮೀಣ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರಿಗೆ ಅವರು ಮಾರ್ಗದರ್ಶನ ನೀಡಿದರು. ಇದರಿಂದ ಅವರ ಹಳ್ಳಿಯಲ್ಲೇ ಡಿಜಿಟಲ್ ಸೇವೆಗಳ ಹೊಸ ಕೇಂದ್ರವೊಂದು ರೂಪುಗೊಂಡಿತು.

Leave a Reply

Your email address will not be published. Required fields are marked *

You may have missed