ಕನ್ನಡಿಗರ ಮೀಸಲಾತಿ ವಿರುದ್ದದ PIL; ಗರ್ಭಿಣಿ ಬಗ್ಗೆ ಮಾನವೀಯತೆ ತೋರಿದ ಹೈಕೋರ್ಟ್ ಜಡ್ಜ್

karnataka high Court

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧೇಯಕದ ವಿರುದ್ಧದ ಧಾವೆ ವಿಚಾರದಲ್ಲಿ ಕರ್ನಾಟಕ ಹೈ ಕೋರ್ಟ್ ಪೀಠದ ಆದೇಶ ಇಡೀ ದೇಶದ ಗಮನಸೆಳೆದಿದೆ.

ಈ ವಿಧೇಯಕ ಬಂದ್ರೆ ಆಕೆಗೆ ಕೆಲ್ಸ ಹೋಗುತ್ತೆ ಅಂತ PIL ಹಾಕಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್, ಇದು PIL ಅಲ್ಲ ಪರ್ಸನಲ್ ಅಜೆಂಡ ಇಟ್ಟು ಹಾಕಿರೋ ಪಿಟಿಷನ್ ಎಂದಿತು. ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೇ 5000 ದಂಡ ಹಾಕಲು ನ್ಯಾಯಮೂರ್ತಿಗಳು ಮುಂದಾದರು.

ಈ ಸಂದರ್ಭದಲ್ಲಿ ಗಲಿಬಿಲಿಗೊಂಡ ಮಹಿಳೆಯ ಪರ ವಕೀಲರು ‘ಅರ್ಜಿದಾರರು ಪ್ರೆಗ್ನೆಂಟ್ ಲೇಡಿ ಆಕೆ ಬಳಿ ಹಣ ಇಲ್ಲ’ ಎಂದು ವಾದಿಸಿದರು. ಈ ವೇಳೆ ಕೋರ್ಟ್ ‘ಇಲ್ಲಿ ಎಮೋಷನ್ಸ್ ವರ್ಕ್ ಆಗೋಲ್ಲ, ಎಂದು ಹೇಳಿದೆಯಾದರೂ, ಕೊನೆಗೆ ಫೈನ್ ಬೇಡ ಅಂತ ಹೇಳಿ ಎಚ್ಚರಿಕೆ ನೀಡಿತು.

ಕೋರ್ಟ್ ಕಲಾಪ ಕುರಿತ ವೀಡಿಯೋವನ್ನು ಸಾಮಾಜಿಕ ಜಾಲತಾಣ ‘X’ನಲ್ಲಿ ಹಂಚಿಕೊಂಡಿರುವ ಸಂಸದ ಜಿ.ಸಿ.ಚಂದ್ರಶೇಖರ್, ‘ಕನ್ನಡಿಗರ ಶತ್ರು ಇನ್ನೆಲ್ಲೂ ಇಲ್ಲ ಕರ್ನಾಟಕದ ಒಳಗೆ ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ.

You may have missed