ಕಡಲತಡಿಯಿಂದ ಲಡಾಕ್ ವರೆಗೆ.. ಮಂಗಳೂರು-ಉಡುಪಿ ಯುವಕರ ಸಾಧನೆಗೆ ಹ್ಯಾಟ್ಸ್ ಅಪ್..
ಕಡಲತಡಿಯಿಂದ ಲಡಾಕ್ ವರೆಗೆ.. ಮಂಗಳೂರು-ಉಡುಪಿ ಯುವಕರ ಸಾಧನೆಗೆ ಹ್ಯಾಟ್ಸ್ ಅಪ್..
ಕರಾವಳಿ ಹುಡುಗರು ಗಗನ ಚುಂಬಿಸಿ ಬಂದರು ; ಕಾರ್ಕಳದಿಂದ ಲಡಾಕ್ ವರೆಗೆ..!!
ಭಾರತದ ಮುಕುಟದಂತಿರುವ ಕಾಶ್ಮೀರವನ್ನು ಕ್ರಮಿಸಿ, ಲಡಾಕ್ ತಲುಪಿ, ಚೀನಾದ ಹೆಬ್ಬಾಗಿಲು ತಟ್ಟಿದರು. ಅದೂ ಕೂಡಾ ದ್ವಿಚಕ್ರ ವಾಹನದಲ್ಲಿ ತೆರಳಿ ಹೊಸ ಸಾಧನೆ ಮಾಡಿದರು.
ಕಾರ್ಕಳದ ಯುವಕರಾದ ರಜತ್ ಶೆಣೈ, ರಾಜೇಶ್ ಸಾಲ್ಯಾನ್, ಸ್ಟಾನ್ಲಿ ಫೆರ್ನಾಂಡೀಸ್ , ಮತ್ತು ಗುರುಕುಲ್ ಕಾಲೇಜು ಪ್ರಾಧ್ಯಾಪಕ ಸ್ಟೀಫನ್ ಕೊಮ್ಸ್ ಬುಲೆಟ್ ಪ್ರೇಮಿಗಳು. ತಮ್ಮ ಬುಲ್ಲೆಟನ್ನೇರೀ, ಅಶ್ವಮೇಧ ಯಾಗದಂತೆ ಭಾರತ ಖಂಡವನ್ನೇ ಸುತ್ತಿದರು.
ಆಗಸ್ಟ್ ರಂದು 13 ರಂದು ಗೋಮಟ್ಟನ ನಾಡು ಕಾರ್ಕಳದಿಂದ ಹೋರಾಟ ಈ ಯುವ ಸಾಹಸಿಗಳು, ಎರಡು ಬುಲೆಟ್ ಬೈಕ್ ಗಳಲ್ಲಿ ಸುಮಾರು 10,892 ಕಿಲೋ ಮೀಟರ್ ಕ್ರಮಿಸಿ ಲಡಾಕ್ ತೆರಳಿದ್ದರು.
ಮಹಾರಾಷ್ಟ, ಗುಜರಾತ್, ಪಂಜಾಬ್, ಹರಿಯಾಣ, ಚಂಡೀಗಢ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಸವಾರಿ ಕೈಗೊಂಡು ಜಮ್ಮುಕಾಶ್ಮೀರ ತಲುಪಿದ್ದರು. ಇದು ಒಂದು ರೀತಿಯ ಸಾಹಸ ಯಾತ್ರೆ, ಅದರ ಜೊತೆಯಲ್ಲೇ ಆಲ್ಲಲ್ಲಿನ ಜೀವನ ಶೈಲಿಯ ಅಧ್ಯಯನ, ಅದರೊಟ್ಟಿಗೆ ಸಾಹಸ ಕಥನ ಬರೆಯುವ ಹುಮ್ಮಾಸ್ಸು ಈ ನಾಲ್ವರನ್ನು ಈ ಸುದೀರ್ಘ ಪಯಣಕ್ಕೆ ಧುಮುಕಿಸಿತು.
ಹೋದಲ್ಲೆಲ್ಲಾ ಇವರಿಗೆ ಎದುರಾದದ್ದು ಸವಾಲುಗಳೇ. ಕೈಯಲ್ಲಿ ದುಡ್ಡಿತ್ತಾದರೂ ಪರಿಸ್ಥಿತಿ ಕಠಿಣವಾಗಿತ್ತು ಆದರೂ ಹಾದಿಯುದ್ದಕ್ಕೂ ಸರ್ವ ಸಹಕಾರ ಸಿಕ್ಕಿತ್ತು. ಮಿಲಿಟರಿಯವರ ಸಹಾಯ ಕೂಡ ಮರೆಯಲಾರದಷ್ಟು ಎಂದು ಹೇಳುತ್ತಾರೆ ಇವರು.
ಪ್ರತಿ ನಿತ್ಯ 500 ರಿಂದ 900 ಕಿಲೋ ಮೀಟರ್ ದೂರ ಕ್ರಮಿಸಿದ್ದರಿಂದ ಏಳೇ ದಿನಗಳಲ್ಲಿ ಲಡಾಕ್ ಸುತ್ತಿ ಬಲರು ಸಾಧ್ಯ ಆಯಿತು ಎನ್ನುವುದು ಈ ಸಾಹಸಿ ಹುಡುಗರ ಅನುಭವದ ಮಾತು.
ಈ ಯುವಕರು ತವರಿಗೆ ಮರಳಿದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಕಳದ ಜನ ಅದ್ದೂರಿಯಿಂದ ಬರಮಾಡಿಕೊಂಡರು. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ.