ಆಹಾ ಏನಿದೆನಿದೇನು…ಚಿತ್ತಾರ ಭೂಮಿ ಭಾನು

ಎಲ್ಲಿ ನೋಡಿದರಲ್ಲಿ ಹಿಮ ಮಳೆಯ ಸೊಗಸು, ಹಸಿರು ಹೊದ್ದ ಭೂತಾಯಿಯನ್ನು ಅಪ್ಪಿಕೊಂಡಿರುವ ಮಂಜು. ಗಿಡ, ಮರ , ಕಟ್ಟಡಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿಮ. ಇಂತಹ ಅದ್ಬುತ ದೃಷ್ಯಗಳು ಇದೀಗ ಪ್ರಾಕೃತಿಕವಾಗಿ ಜಮ್ಮು ಕಾಶ್ಮೀರ ಹಾಗೂ ಧರ್ಮಸಾಲದಲ್ಲಿ ಕಾಣಸಿಗುತ್ತಿದ್ದು, ಈ ಅತ್ಯುದ್ಭತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಉತ್ತರ ಭಾರತದೆಡೆಗೆ ಸಾಗಿದೆ.
ಮೈ ನಡುಗಿಸುವ ಚಳಿಗೆ ಬೆಚ್ಚನೆಯ ಹೊದಿಗೆ ಹೊದ್ದರೂ ಮೈಯನ್ನು ತಾಗುವ ಕುಳಿರ್ಗಾಳಿ ಜುಂ ಎನಿಸಿದರೂ, ಇನ್ನಷ್ಟು ಹೊತ್ತು ಈ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು ಎನ್ನುತ್ತದೆ ಮನಸ್ಸು.
ಒಂದೇ ಸಮನೆ ಸುರಿಯುತ್ತಿರುವ ಮಂಜಿನ ಮಳೆ, ಭೂಮಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದರಿಂದ ಭೂತಾಯಿ ಹಸಿರು ಸೀರೆ ಹೊದ್ದು ಮಲಗಿದ್ದಾಳೇನೋ ಎಂಬು ಭಾಸವಾಗುವಂತೆ ಮಾಡುತ್ತಿದೆ.
ಮರ ಗಿಡಗಳು ಹಾಗೂ ಕಟ್ಟಡಗಳನ್ನು ಹಿಮದಿಂದಲ ರಚಿಸಲಾಗಿದೆಯೇನೋ ಎಂಬ ಭ್ರಮೆಯೂ ನಮ್ಮನ್ನು ಆವರಿಸಿಕೊಳ್ಳುವಂತೆ ಮಾಡಿದೆ ಇಲ್ಲಿನ ವಾತಾವರಣ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಧರ್ಮಸಾಲಗಳಿಗೆ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮಂಜಿನ ಮಳೆಯಲ್ಲಿ ಮಿಂದು ಪೋಟ ಕ್ಲಿಕ್ಕಿಸಿ ಸಂಭ್ರಮಸುತ್ತಿದ್ದಾರೆ…