ಹಳುವಾಡಿ ಹಳ್ಳಿಯಲ್ಲಿ ದೇವರ ಪ್ರತ್ಯಕ್ಷ ಹಾವಿಗೆ ಪ್ರತಿನಿತ್ಯ ನಮಸ್ಕಾರ

ಹಾವು ಕಂಡ್ರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ. ನಾಗರ ಹಾವು ಅಂದ್ರೆ ಭಯವೋ ಭಯ. ಆದ್ರೆ ಮಂಡ್ಯದ ಹಳುವಾಡಿ ಹಳ್ಳಿಯಲ್ಲಿ ದೇವರ ಹಾವನ್ನು ಮುಟ್ಟುತ್ತಾರೆ. ಕಳೆದ 5 ದಿನಗಳಿಂದ ಪ್ರತ್ಯಕ್ಷ ಆಗಿರೋ ಆ ನಾಗರ ಕಂಡರೆ ಎಲ್ಲರಗೂ ಭಯ, ಭಕ್ತಿ. ಪ್ರತಿನಿತ್ಯ ದೇವಸ್ಥಾನದ ಬಳಿಯೇ ಇರೋ ಆ ಹಾವನ್ನು ಕಂಡು ಕೈ ಮುಗಿದು ಜನ್ರು ಹೋಗ್ತಾ ಇದ್ದಾರೆ.
ಹಳುವಾಡಿಯ ಗ್ರಾಮ ದೇವತೆ ಪಟ್ಟಲದಮ್ಮ ದೇವಿ ದೇವಸ್ಥಾನದಿಂದ ಹೊರ ಬರೋ ಈ ನಾಗರ ಕಂಡ್ರೆ
ಜನ್ರು ಭಕ್ತಿಯಿಂದ ನಮಿಸ್ತಾರೆ. ಕೈಯಾರೆ ಮುಟ್ಟಿ ನಮಸ್ಕಾರ ಮಾಡ್ತಾರೆ. ಈ ನಾಗರ ಹಾವನ್ನು ಭಕ್ತಿಯಿಂದ ಪೂಜೆ ಮಾಡಿದರೆ ಗ್ರಾಮಕ್ಕೆ ಒಳ್ಳೆದು ಆಗುತ್ತೆ ಅನ್ನೋ ನಂಬಿಕೆ ಗ್ರಾಮಸ್ಥರದ್ದು.
ಪಟ್ಟಲದಮ್ಮ ದೇವಸ್ಥಾನದ ಹಿಂದೆ ಒಂದು ಹುತ್ತ ಇತ್ತಂತೆ. ಆ ಹುತ್ತದಲ್ಲಿ ಈ ನಾಗರ ಹಾವು ಇತ್ತಂತೆ. ಆದ್ರೆ ಕಳೆದ ಕೆಲವು ವರ್ಷಗಳ ಹಿಂದೆ ಆ ಹುತ್ತ ಮಣ್ಣಿನಲ್ಲಿ ಹೂತು ಹೋಗಿದೆ. ಹಾಗಾಗಿ ಹುತ್ತದಲ್ಲಿದ್ದ ನಾಗರ ಹಾವು ಈಗ ದೇವಸ್ಥಾನವನ್ನು ತನ್ನ ಆವಾಸ ಸ್ಥಾನ ಮಾಡಿಕೊಂಡಿದೆ ಎನ್ನುತ್ತಿದ್ದಾರೆ ಗ್ರಾಮಸ್ತರು. ಈ ಹಾವು ಈವರೆಗೂ ಯಾರಿಗೂ, ಯಾವುದೇ ತೊಂದ್ರೆ ಕೊಟ್ಟಿಲ್ಲ ಎನ್ನುತ್ತಿದ್ದಾರೆ ಜನ.
ಗ್ರಾಮಸ್ಥರ ಭಕ್ತಿ ಮತ್ತು ಹಾವಿನ ಮೇಲೆ ಪ್ರೀತಿಯಿಂದ ನಾಗರಹಾವು ದೇವರ ಸ್ಥಾನ ಪಡೆದುಕೊಂಡಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ಹಾವನ್ನು ದೇವರ ಸ್ವರೂಪ ಅಂತ ತಿಳಿದು ಪೂಜೆ ಮಾಡ್ತಾ ಇದ್ದಾರೆ