ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರುವ ಸಂಬಂಧ ಇಂಡೋನೇಷಿಯಾದಲ್ಲಿ ಸಿಬಿಐ ತಂಡ

ಇಂಡೋನೇಷಿಯಾದ ಪೋಲಿಸರ ವಶದಲ್ಲಿರು ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರುವ ಸಂಬಂಧ ಮುಂಬೈ,ದೆಹಲಿ ಪೋಲಿಸರನ್ನು ಒಳಗೊಂಡ ಸಿಬಿಐ ತಂಡ ಬಾಲಿಗೆ ಬಂದಿಳಿದಿದೆ.
ಭಾರತದ ರಾಜತಾಂತ್ರಿಕ ಅಧಿಕಾರಿ ಸಂಜೀವ್ ಕುಮಾರ್ ಅಗರ್ ವಾಲ್ ಛೋಟಾ ರಾಜನ್ ನನ್ನು ಭೇಟಿಯಾಗಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತು ಕತೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಇಂಡೋನೇಷಿಯಾ ಪೋಲಿಸರು ಛೋಟಾ ರಾಜನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಭೂಗತ ಪಾತಕಿ ಛೋಟಾ ರಾಜನ್ ಗೆ ಜೀವ ಬೆದರಿಕೆಯ ಹಿನ್ನಲೆಯಲ್ಲಿ ಜೈಲಿನಲ್ಲಿ ಭಾರೀ ಪೋಲಿಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುಮಾರು 75 ಪ್ರಕರಣದಲ್ಲಿ ಭಾರತಕ್ಕೆ ಛೋಟಾರಾಜನ್ ಬೇಕಾಗಿದ್ದು, ಇದರಲ್ಲಿ ಆರು ಕೇಸ್ ಗಳಲ್ಲಿ ದೆಹಲಿ ಪೋಲಿಸರಿಗೆ ಬೇಕಾಗಿದ್ದಾನೆ.
ಅಲ್ಲದೆ ಸುಮಾರು 20 ಪ್ರಕರಣಗಳಲ್ಲಿ ಮುಂಬೈ ಪೋಲಿಸರಿಗೆ ಛೋಟಾ ರಾಜನ್ ಬೇಕಾಗಿದ್ದಾನೆ.