ದೊಡ್ಡಬಳ್ಳಾಪುರ: ಹೆತ್ತಮ್ಮನ ಕತ್ತು ಸೀಳಿ ಕೊಂದ ಮಗ

ದೊಡ್ಡಬಳ್ಳಾಪುರ :ಹೆತ್ತ ಮಗನೆ ತನ್ನ ತಾಯಿಯ ಕತ್ತು ಸೀಳಿ ಕೊಂದಿರುವ ಘಟನೆ ದೊಡ್ಡಬಳ್ಳಾಪುರ ದಲ್ಲಿ ನಡೆದಿದೆ. ತಾಲೂಕಿನ ರಾಗರಾಳ್ಳಗುಟ್ಟೆ ಬಳಿ ಘಟನೆ ನಡೆದಿದೆ. ರತ್ನಮ್ಮ (56) ಕೊಲೆಯಾದ ತಾಯಿಯಾಗಿದ್ದು, ಮಗ ಗಂಗರಾಜು(35) ಎಂಬುವವನಿಂದ ಕೊಲೆಯಾಗಿದ್ದಾರೆ ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ಕುಡಿದ ಮತ್ತಿನಲ್ಲಿದ್ದ ಗಂಗರಾಜು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ತನ್ನ ತಾಯಿಯ ಕತ್ತನ್ನು ಹರಿತವಾದ ಚಾಕುವಿನಿಂದ ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ತಾಯಿ ಮತ್ತು ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇಂದು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಾತಿನ ಜಗಳ ವಿಕೋಪಕ್ಕೆ ತಿರುಗಿದ್ದು ಕುಡಿದು ಮತ್ತಿನಲ್ಲಿದ್ದ ಮಗ ಗಂಗರಾಜು ತಾಯಿಯನ್ನು ಕೊಲೆ ಮಾಡಿದ್ದು, ನಂತರ ಘಟನಾ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಕೆ.ಬಾಬಾ, ಅಡಿಷನಲ್ ನಾಗೇಶ್, ಸೇರಿದಂತೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may have missed