ಮಿಚಾಂಗ್ ಚಂಡಮಾರುತ; ತಮಿಳುನಾಡು ತತ್ತರ

ಚೆನ್ನೈ: ಪೂರ್ವ ಕರಾವಳಿಯಲ್ಲಿ ಮಿಚಾಂಗ್ ಚಂಡಮಾರುತವು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಭೀಕರ ಅವಘಡಗಳು ಸರಣಿ ಸಾವಿನ ಪ್ರಕರಣಗಳಿಗೂ ಸಾಕ್ಷಿಯಾಗುತ್ತಿವೆ.
ಮಂಗಳವಾರ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿರುವ ಚಂಡಮಾರುತ ನೆರೆಯ ತಮಿಳುನಾಡಿನಲ್ಲೂ ಪ್ರಳಯಕಾರಿ ಸನ್ನಿವೇಶಕ್ಕೆ ಕಾರಣವಾಯಿತು. ಮಿಚಾಂಗ್ ಚಂಡಮಾರುತ ಪರಿಣಾಮವಾಗಿ ಭಾರೀ ಮಳೆಯಾಗಿದ್ದರಿಂದಾಗಿ ತಮಿಳುನಾಡಿನ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈ ನಗರವಂತೂ ತತ್ತರಿಸಿದೆ. ಬಹುತೇಕ ನಗರಗಲ್ಲಿ ನೀರು ನಿಂತಿದ್ದು ವಾಹನ ಸಂಚಾರ ಸ್ಥಬ್ಧಗೊಂಡಿದೆ.
ಭಾರೀ ಸಾವು ನೋವುಗಳಿಗೂ ಮಿಚಾಂಗ್ ಚಂಡಮಾರುತ ಕಾರಣವಾಗಿದೆ. ತಮಿಳುನಾಡಿನಲ್ಲಿ ಸರಣಿ ಘಟನೆಗಳಿಗೆ 17 ಮಂದಿ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದ ಹಲವು ಜಿಲ್ಲೆಗಳಲ್ಲೂ ಪ್ರಳಯ ಸೃಷ್ಟಿಸಿದೆ.