‘ಎಲ್ಲ ಮಾಹಿತಿ ಈಗಾಗಲೇ EDಗೆ ಕೊಟ್ಟಿದ್ದರೂ ಮತ್ತೆ ನೋಟೀಸ್, ಇದು ಕಿರುಕುಳ’; ಶಿವಕುಮಾರ್ ಆಕ್ರೋಶ

0
D.K.Shivakumar - DKS

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ED ನೋಟೀಸ್ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘“ಈ ಬೆಳವಣಿಗೆ ನನಗೆ ತುಂಬಾ ಆಘಾತಕಾರಿಯಾಗಿದೆ. ನಾನು ಇಡೀ ವಿವರಗಳನ್ನು ಈಗಾಗಲೇ EDಗೆ ನೀಡಿದ್ದೇನೆ. ನನ್ನ ಸಹೋದರನಿಗೂ, ನನಗೂ ED ಸಮನ್ಸ್ ನೀಡಿತ್ತು. ನಾವು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇವೆ. ನಮ್ಮ ಸಂಸ್ಥೆಯೇ ಇದು. ಕಾಂಗ್ರೆಸ್ ನಾಯಕರು ಕೂಡಾ ಆ ಸಂಸ್ಥೆಯನ್ನು ಬೆಂಬಲಿಸಿದ್ದರು. ತಪ್ಪು ಎಂದೇನೂ ಇಲ್ಲ,’ ಎಂದು ಎಂದರು.

“ಎಲ್ಲವೂ ಪಾರದರ್ಶಕ, ಅಡಗಿ ಕೂರುವ ವಿಷಯವೇ ಇಲ್ಲ. ಎಲ್ಲವೂ ಕಪ್ಪು–ಬಿಳುಪಿನಲ್ಲಿ ಇದೆ. ED ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕವೂ ಪೊಲೀಸರು ಮತ್ತೆ ಪ್ರಕರಣ ದಾಖಲಿಸುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ,” ಎಂದು ಡಿಕೆಶಿ ಹೇಳಿದರು.

“ನ್ಯಾಯಾಲಯದಲ್ಲಿ ನಾವು ಹೋರಾಟ ಮುಂದುವರಿಸುತ್ತೇವೆ. ಇದು ನಿಸ್ಸಂದೇಹವಾಗಿ ಕಿರುಕುಳ. ನಮ್ಮ ಹಣವೇ ಇದು. ನಾವು ತೆರಿಗೆ ಪಾವತಿಸಿದ ಹಣವನ್ನು ಯಾರಿಗಾದರೂ ದಾನ ಮಾಡಬಹುದು. ಅದರಲ್ಲಿ ಯಾವುದೇ ಅಪರಾಧವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟರು.

“PMLA ಪ್ರಕರಣ ಮುಗಿದಿದೆ. ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಸಲಾಗಿದೆ. ಹಾಗಿರುವಾಗ ಅವರು ಇನ್ನೂ ಏನು ಮಾಡಬಲ್ಲರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಬೆಂಬಲಿಗರಿಗೆ ಕಿರುಕುಳ ನೀಡುವ ರಾಜಕೀಯ ಆಟವೇ ಇದು. ಗೊಂದಲ ಸೃಷ್ಟಿಸುವುದು ಅವರ ಉದ್ದೇಶ,” ಎಂದು ಡಿಕೆಶಿ ಆರೋಪಿಸಿದರು.

Leave a Reply

Your email address will not be published. Required fields are marked *

You may have missed