ಉತ್ತರ ಭಾರತದ ಹಲವೆಡೆ 200 ಸ್ಫೋಟಗಳ ಸಂಚು : ಜೆಇಎಂ ಸಂಚು ಬಹಿರಂಗ

0
DElhi Police - Copy

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್‌ 10ರಂದು ನಡೆದ ಸ್ಫೋಟ ಪ್ರಕರಣವು ದೊಡ್ಡ ಉಗ್ರಸಂಚಿನ ಸುಳಿವನ್ನೂ ನೀಡಿದೆ. ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆ ನಂಟು ತನಿಖೆಯಿಂದ ದೃಢಪಟ್ಟಿದೆ. ಬಂಧಿತರಿಗೆ ಬಾಂಬ್ ತಯಾರಿಕೆ ಬಗ್ಗೆ ಮಾರ್ಗದರ್ಶನ ನೀಡಿದ್ದು, ಜೆಇಎಂ ಕಾರ್ಯಕರ್ತ ಹಂಜುಲ್ಲಾ ಎನ್ನುವುದು ತನಿಖಾಧಿಕಾರಿಗಳ ನಿರ್ಧಾರ.

ತನಿಖೆಯಿಂದ ಹೊರಬಂದಿರುವ ಮತ್ತೊಂದು ಗಂಭೀರ ಮಾಹಿತಿ ಎಂದರೆ — ಆರೋಪಿಗಳು ದೆಹಲಿ, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಏಕಕಾಲದಲ್ಲಿ 200 ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದರು. ಈ ಉದ್ದೇಶಕ್ಕಾಗಿ, ಫರಿದಾಬಾದ್ ಉಗ್ರಮಾಡ್ಯೂಲ್‌ಗೆ ಪಾಕಿಸ್ತಾನ ಮೂಲದ ಐಎಸ್‌ಐ ಸಂಪರ್ಕ ಹೊಂದಿರುವ ಜೆಇಎಂ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದನೆಂದು ತಿಳಿದುಬಂದಿದೆ.

ಮುಖ್ಯ ಆರೋಪಿ ಮೌಲ್ವಿ ಇರಾನ್ ಅಹ್ಮದ್ ಗೆ ಹಂಜುಲ್ಲಾ ನೇರ ಸಂಪರ್ಕ ಹೊಂದಿದ್ದನು. ಜಮ್ಮು-ಕಾಶ್ಮೀರದಲ್ಲಿ ಕಂಡುಬಂದಿದ್ದ ಜೆಇಎಂ ಪೋಸ್ಟರ್‌ಗಳಲ್ಲಿ “ಕಮಾಂಡರ್ ಹಂಜುಲ್ಲಾ ಭಾಯಿ” ಎಂಬ ಹೆಸರು ಗಮನಸೆಳೆದಿದ್ದು, ಅದರಿಂದಲೇ ತನಿಖೆ ವಿಸ್ತರಿಸಿ, ಅಂತಿಮವಾಗಿ ಫರಿದಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಮಾಡ್ಯೂಲ್‌ ಅನ್ನು ಪೊಲೀಸರೇ ಭೇದಿಸಿದರು. ಈ ಸಂದರ್ಭದಲ್ಲಿ 2,900 ಕೆ.ಜಿ. ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು.

ಹಂಜುಲ್ಲಾ ಆಕತರಿಗೆ ಟ್ರಯಾಸೆಟೋನ್ ಟ್ರೈಪೆರಾಕ್ಸೈಡ್ (TATP) ಹಾಗೂ ಅಮೋನಿಯಂ ನೈಟ್ರೇಟ್ ಮಿಶ್ರಣ ಮಾಡುವಂತೆ ಸೂಚಿಸಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಡಿಮೆ ಪರಿಣತಿ ಸಾಕಾಗುವ ಈ ಸ್ಫೋಟಕವನ್ನು ವಾಹನಗಳಲ್ಲಿ ಇರಿಸಿ, ಜನಸಂದಣಿ ಪ್ರದೇಶಗಳಲ್ಲಿ ಬಿಟ್ಟುಬಂದರೂ ಶಾಖದಿಂದ ಸ್ಫೋಟಗೊಳ್ಳುವ ಸಾಮರ್ಥ್ಯ ಹೊಂದಿದೆ. ಏಕಾಂಗಿಯಾಗಿ ಕಾರ್ಯನಿರ್ವಹಿಸುವ ಉಗ್ರರು ಬಹುಪಾಲು ಬಳಸುವ ‘ISKP ಮಾದರಿ’ ಸ್ಫೋಟಕ ಆಗಿದೆ ಎನ್ನಲಾಗಿದೆ.

ಯೋಜನೆಯಂತೆ ಸ್ಫೋಟ ಸರಣಿ ಜರುಗದಿದ್ದರೂ, ಆರೋಪಿಗಳ ಚಟುವಟಿಕೆಗಳಿಂದ ಅವರ ಉದ್ದೇಶ ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ಬಿಳಿ i20 ಕಾರನ್ನು ಸ್ಫೋಟದ ವೇಳೆ ಬಳಸಿದ್ದು, ಅದನ್ನು ಶಕೀಲ್ ಒದಗಿಸಿದ್ದ. ಇವನೇ ಸ್ಫೋಟಕಗಳ ಸಾಗಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.

ಮಾಡ್ಯೂಲ್ ಸದಸ್ಯರಲ್ಲಿ ಹಲವು ಮಂದಿ ವೈದ್ಯರು. ವೃತ್ತಿಜೀವನದ ಕಾರಣದಿಂದ ಅವರು ರಾಡಾರ್‌ಗೆ ಸಿಕ್ಕದೇ ಸಂಚು ಮುಂದುವರಿಸಿಕೊಂಡಿದ್ದರು ಎನ್ನಲಾಗಿದೆ. ಪ್ರಮುಖ ನೇಮಕಾತಿದಾರ ಡಾ. ಶಾಹೀನ್ ಹಲವು ಬಾರಿ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ನಡೆಸಿದ್ದು, ಅಹ್ಮದ್ ಅವರನ್ನು ಭೇಟಿಯಾದ ದಾಖಲೆಗಳಿವೆ. ಹೆಚ್ಚಿನ ‘ವೈಟ್‌ ಕಾಲರ್’ ವೃತ್ತಿಪರರನ್ನು ಜಾಲಕ್ಕೆ ಸೆಳೆಯುವ ಕೆಲಸವೂ ಇವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಸುರಕ್ಷಿತ ಸಂದೇಶ ಅಪ್ಲಿಕೇಶನ್‌, ಕೋಡ್ ಭಾಷೆ ಬಳಸಲಾಗುತ್ತದೆ. ಆರೋಪಿಗಳು ‘ಬಿರಿಯಾನಿ’ ಎಂಬ ಕೋಡ್ ಪದವನ್ನು ಸ್ಫೋಟಕಗಳಿಗೆ ಬಳಸುತ್ತಿದ್ದರು ಎಂಬುದು ದಾಖಲೆಗಳ ಮೂಲಕ ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed